‘ಹಿಂದೆ ಎತ್ತುಗಳಿಗೆ ರೋಣಗಲ್ಲನ್ನು ಕಟ್ಟಿ ಸುತ್ತಿಸುವ ಮೂಲಕ ರಾಗಿ ಹುಲ್ಲು ತುಳಿಸುತ್ತಿದ್ದರು. ದೊಡ್ಡ ರೈತರು ವಾರಗಟ್ಟಲೆ ಸುಗ್ಗಿ ಮಾಡುತ್ತಿದ್ದರು. ಈಗ ರೈತರ ಮನೆಗಳಲ್ಲಿ ಎತ್ತುಗಳಿಲ್ಲ. ಎಲ್ಲರೂ ಹೊಲ ಉಳುಮೆ ಮಾಡಲು, ಬಿತ್ತನೆ ಮಾಡಲು ಟ್ರ್ಯಾಕ್ಟರ್ ಅವಲಂಬಿಸಿದ್ದಾರೆ. ಕಟಾವಿಗೂ ಯಂತ್ರ ಬಳಸುತ್ತಿದ್ದಾರೆ. ಕೃಷಿ ಯಂತ್ರಧಾರೆ ಕೇಂದ್ರದ ರಾಗಿ ಒಕ್ಕಣೆ ಯಂತ್ರದಿಂದ ರೈತರಿಗೆ ಅನುಕೂಲ ಆಗಿದೆ. ಇಡೀ ದಿನ ತುಳಿಸುವಷ್ಟು ಹುಲ್ಲನ್ನು ಒಂದೇ ಗಂಟೆಯಲ್ಲಿ ಒಕ್ಕಣೆ ಮಾಡಬಹುದು. ನಮ್ಮೂರಿನಲ್ಲಿ ಎಲ್ಲಾ ರೈತರೂ ಈ ಯಂತ್ರ ಬಳಸುತ್ತಿದ್ದಾರೆ’ ಎನ್ನುತ್ತಾರೆ ಮೇಲಿನ ಕೊಟ್ಟಿಗೆಯ ರೈತರಾದ ದಿನೇಶ್, ಟಾಕೇಶಪ್ಪ, ಮಂಜುನಾಥ, ತಿಪ್ಪೇಶಪ್ಪ, ಓಂಕಾರಪ್ಪ, ಜಯಪ್ಪ ಹಾಗೂ ರಂಗಪ್ಪ.