ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಡಿಹಳ್ಳಿ ಚಂದ್ರಶೇಖರ್ ಅವರ ನಡೆ ಅನುಮಾನಸ್ಪದ ರೀತಿಯಲ್ಲಿ ಕಾಣುತ್ತಿದೆ. ಸಂಘದ ಪೂರ್ವಾನುಮತಿ ಪಡೆಯದೇ ರಾಜ್ಯ ಸಾರಿಗೆ ನೌರರ ಮುಷ್ಕರಕ್ಕೆ ನಾಯಕತ್ವ ನೀಡಿದ್ದಾರೆ. ಹಸಿರು ಶಾಲು ತೆಗೆದು ಕೆಂಪು ಶಾಲು ಧರಿಸಿದರು. ರೈತ ಸಂಘದ ಕಚೇರಿಯನ್ನು ಸಾರಿಗೆ ನೌಕರರ ಮುಷ್ಕರಕ್ಕೆ ಬಳಕೆ ಮಾಡಿಕೊಂಡು ಸಂಘವನ್ನು ವಂಚಿಸಿದರು. ನಾಲ್ಕು ದಶಕಗಳಿಂದ ರೈತ ಸಂಘ ಕಾಪಾಡಿಕೊಂಡು ಬಂದಿದ್ದ ಗೌರವವನ್ನು ಮಣ್ಣುಪಾಲು ಮಾಡಿದರು’ ಎಂದು ದೂರಿದರು.