ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್ ಸಿವಿಲ್ ಎಂಜಿನಿಯರಿಂಗ್ ಇಲಾಖೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ‘ವಿಶ್ವ ಓಝೋನ್ ದಿನ’ ಆಚರಿಸಲಾಯಿತು.
ಮಂಗಳೂರಿನ ಜೆಬಿಎಫ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ನಿರ್ದೇಶಕ ಮತ್ತು ಸಿಇಒ ಮುಖ್ಯ ಅತಿಥಿ ಎ. ಜಿ. ಪೈ ಅವರು ಉದ್ಘಾಟಿಸಿದರು.‘ ಓಝೋನ್ ಪದರ ಸವಕಳಿ ಮತ್ತು ಮಾಂಟ್ರಿಯಲ್ ಪ್ರೊಟೊಕಾಲ್ನ ಪ್ರಾಮುಖ್ಯತೆಯ ಹಿಂದಿರುವ ರಸಾಯನಶಾಸ್ತ್ರ ಮತ್ತು ಮೂಲಗಳನ್ನು ಅರಿಬೇಕು. ಓಝೋನ್ ಪದರವನ್ನು ರಕ್ಷಿಸುವ ಬಗ್ಗೆ ಜಾಗತಿಕವಾಗಿಗಮನ ಕೇಂದ್ರೀಕರಿಸುವುದು ಅಗತ್ಯ’ ಎಂದರು.
ಸಹ್ಯಾದ್ರಿ ಕಾಲೇಜ್ ಡೀನ್ ಆರ್ ಅಂಡ್ ಡಿ ಡಾ. ಎಸ್. ಮಂಜಪ್ಪ , ಹಿರಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್, ಸಹ್ಯಾದಿ ಕಾಲೇಜು ಪ್ರಾಂಶುಪಾಲರಾದ ಡಾ.ಆರ್.ಶ್ರೀನಿವಾಸ್ ರಾವ್ ಕುಂಟೆ , ಡಾ. ಗಣೇಶ್ ಡಿಬಿ ಮಾತನಾಡಿದರು.