ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮೂಲತಃ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಾದ ನಮ್ಮ ಸಮಾಜದವರು ಕೆಲಸದ ಸಲುವಾಗಿ ವಲಸೆ ಹೋಗಿ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಾಸರಗೋಡು ಜಿಲ್ಲೆಗಳಲ್ಲೂ ನೆಲೆಸಿದ್ದಾರೆ. ಅವರಲ್ಲಿ ಹಲವಾರು ಕುಟುಂಬಗಳಿಗೆ ಸುಸಜ್ಜಿತ ಮನೆ, ನಿವೇಶನ, ಶೌಚಾಲಯ, ವಿದ್ಯುತ್, ಕುಡಿಯುವ ನೀರು, ದಾರಿದೀಪ, ರಸ್ತೆ, ಹಕ್ಕುಪತ್ರ ಇತ್ಯಾದಿ ಸೌಕರ್ಯಗಳು ಇನ್ನೂ ದೊರಕಿಲ್ಲ’ ಎಂದರು.