ಅಂದು ಸಂಜೆ 4 ಗಂಟೆಯಿಂದ ನಾಟ್ಯಾಲಯದ ಶಿಷ್ಯೆಯರಾದ ಕೊಟ್ಟಾರದ ವಿದುಷಿ ಪ್ರತಿಮಾ ಶ್ರೀಧರ್, ವಿದುಷಿ ಸೌಮ್ಯಾ ರಾವ್, ಬೆಂಗಳೂರಿನ ಪ್ರಮೋದಾ ಭಟ್ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ವಹಿಸುವರು. ಕಟೀಲು ಕ್ಷೇತ್ರದ ಶ್ರೀಹರಿನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡುವರು. ನಾಟ್ಯಗುರು ಉಳ್ಳಾಲ ಮೋಹನ್ಕುಮಾರ್ ಶುಭಾಶಂಸನೆ ಮಾಡುವರು. ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಅಭಿನಂದನಾ ಭಾಷಣ ಮಾಡುವರು. ಗೌರವ ಅಭ್ಯಾಗತರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ, ಎಸ್ಡಿಎಂ ಎಂಬಿಎ ಮಾಜಿ ನಿರ್ದೇಶಕ ಡಾ. ದೇವರಾಜ್ ಕೆ., ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ‘ನಮ್ಮ ಕುಡ್ಲ’ದ ಲೀಲಾಕ್ಷ ಕರ್ಕೇರ ಭಾಗವಹಿಸುವರು ಎಂದರು.