‘ಕ್ರೀಡಾಕೂಟಕ್ಕೆ ಬಹುದಿನಗಳಿಂದ ಸಿದ್ಧತೆ ನಡೆಸುತ್ತೇವೆ. ಮಕ್ಕಳಿಗೆ ಮೊದಲು ಬಣ್ಣದ ಗುರುತು ಹೇಳಿಕೊಟ್ಟು, ಮೆತ್ತನೆಯ ಚೆಂಡು ಎಸೆಯುವುದನ್ನು ಕಲಿಸಬೇಕಾಗುತ್ತದೆ. ಉಳಿದ ಮಕ್ಕಳಂತೆ ಈ ಮಕ್ಕಳು ಎಲ್ಲವನ್ನೂ ಕಲಿಯುತ್ತಾರೆ. ಆದರೆ, ಕಲಿಕೆಯ ಹಂತ ತುಸು ನಿಧಾನ ಅಷ್ಟೆ. ಕಲಿಸುವ ಶಿಕ್ಷಕರಿಗೆ ತಾಳ್ಮೆ ಬೇಕು’ ಎಂದು ಮೂಡುಬಿದಿರೆ ಸ್ಫೂರ್ತಿ ಶಾಲೆಯ ಶಿಕ್ಷಕಿ ಸಂಧ್ಯಾ ಅಭಿಪ್ರಾಯ ವ್ಯಕ್ತಪಡಿಸಿದರು.