ಉದ್ಯೋಗಕ್ಕೆ ತೆರಳುವ ಅನೇಕರು ಸಂಟ್ಯಾರ್ ಜಂಕ್ಷನ್ ಬಳಿ ವಾಹನ ನಿಲ್ಲಿಸಿ ಬಸ್ನಲ್ಲಿ ತೆರಳುತ್ತಾರೆ. ಪಾಣಾಜೆ ಕಡೆಯಿಂದ ಪುತ್ತೂರಿಗೆ ತೆರಳುತ್ತಿದ್ದ ಕಾರು ಸಂಟ್ಯಾರ್ ಮಾರ್ಗವಾಗಿ ಚಲಿಸುತ್ತಿತ್ತು. ಚಾಲಕ ಸಂಟ್ಯಾರ್ ಬಳಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರು. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಹಲವು ದ್ವಿಚಕ್ರ ವಾಹನಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ಕಾರಿನ ಮುಂಭಾಗವೂ ನಜ್ಜುಗುಜ್ಜಾಗಿದೆ.