<p><strong>ಉಜಿರೆ:</strong> ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ಮೃತ್ಯುಂಜಯ ನದಿಗೆ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದ್ದಾರೆ.</p>.<p>ಸದ್ಯ ನದಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಸರಾಗವಾಗಿ ಹರಿದು ಹೋಗಲು ಸಿಮೆಂಟ್ ಪೈಪ್ ಅಳವಡಿಸಿ ಅದರ ಮೇಲೆ ಕಲ್ಲು ಹಾಗೂ ಮರಳು ಜೋಡಿಸಿ ಸೇತುವೆ ರಚಿಸಿದ್ದಾರೆ. ಲಾರಿ ಸಂಚರಿಸುವಷ್ಟು ಸೇತುವೆ ಅಗಲವಾಗಿದೆ.</p>.<p>ತಾತ್ಕಾಲಿಕ ಸೇತುವೆಯಿಂದಾಗಿ ಅನ್ನಾರು, ಮುಗುಳಿತಡ್ಕ, ಪಾದೆ, ಮರ್ವದಡಿ, ಅರಣಪಾದೆ, ಕೆಮ್ಟಾಜೆ ಪ್ರದೇಶಗಳ ಸುಮರು 100 ಹೆಚ್ಚಿನ ಕುಟುಂಬಗಳಿಗೆ ಚಾರ್ಮಾಡಿ, ಕಕ್ಕಿಂಜೆಗೆ ಸಂಪರ್ಕಿಸಲು ನಾಲ್ಕು ಕಿ.ಮೀ. ಕಡಿಮೆಯಾಗುತ್ತದೆ. ಈ ಪ್ರದೇಶಗಳಿಗೆ ಕತ್ತರಿಗುಡ್ಡೆ ಮೂಲಕ ರಸ್ತೆ ಇದೆ. ಆದರೆ, ಆ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ತಾತ್ಕಾಲಿಕ ಸೇತುವೆ ನಿರ್ಮಿಸಿದ ಜಾಗದಲ್ಲಿ ಕಿರುಸೇತುವೆ ನಿರ್ಮಾಣವಾದರೆ ಚಾರ್ಮಾಡಿಯ ಒಂದು ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p><strong>ವಿಶೇಷ ಉಪನ್ಯಾಸ ನಾಳೆ</strong></p>.<p>ಉಜಿರೆ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ, ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ.ಬಿ.ಯಶೋವರ್ಮ ಅವರ ಸ್ಮರಣಾರ್ಥ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಫೆ.20ರಂದು ಬೆಳಿಗ್ಗೆ 11ಗಂಟೆಗೆ ಅರಿವಿನ ದೀವಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>‘ಪರಿಸರ ಸಂರಕ್ಷಣೆ - ಪರ್ಯಾಯ ದಾರಿಗಳು’ ಕುರಿತು ಲೇಖಕ ಶಿರಸಿಯ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಬೋಜಮ್ಮ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ, ಕಾರ್ಯಕ್ರಮದ ಸಂಯೋಜಕ ಪ್ರೊ.ನಾಗಣ್ಣ ಡಿ.ಎ. ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಜಿರೆ:</strong> ಚಾರ್ಮಾಡಿ ಗ್ರಾಮದ ಕೊಳಂಬೆಯಲ್ಲಿ ಮೃತ್ಯುಂಜಯ ನದಿಗೆ ಗ್ರಾಮಸ್ಥರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದ್ದಾರೆ.</p>.<p>ಸದ್ಯ ನದಿಯಲ್ಲಿ ಸಾಮಾನ್ಯ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಸರಾಗವಾಗಿ ಹರಿದು ಹೋಗಲು ಸಿಮೆಂಟ್ ಪೈಪ್ ಅಳವಡಿಸಿ ಅದರ ಮೇಲೆ ಕಲ್ಲು ಹಾಗೂ ಮರಳು ಜೋಡಿಸಿ ಸೇತುವೆ ರಚಿಸಿದ್ದಾರೆ. ಲಾರಿ ಸಂಚರಿಸುವಷ್ಟು ಸೇತುವೆ ಅಗಲವಾಗಿದೆ.</p>.<p>ತಾತ್ಕಾಲಿಕ ಸೇತುವೆಯಿಂದಾಗಿ ಅನ್ನಾರು, ಮುಗುಳಿತಡ್ಕ, ಪಾದೆ, ಮರ್ವದಡಿ, ಅರಣಪಾದೆ, ಕೆಮ್ಟಾಜೆ ಪ್ರದೇಶಗಳ ಸುಮರು 100 ಹೆಚ್ಚಿನ ಕುಟುಂಬಗಳಿಗೆ ಚಾರ್ಮಾಡಿ, ಕಕ್ಕಿಂಜೆಗೆ ಸಂಪರ್ಕಿಸಲು ನಾಲ್ಕು ಕಿ.ಮೀ. ಕಡಿಮೆಯಾಗುತ್ತದೆ. ಈ ಪ್ರದೇಶಗಳಿಗೆ ಕತ್ತರಿಗುಡ್ಡೆ ಮೂಲಕ ರಸ್ತೆ ಇದೆ. ಆದರೆ, ಆ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.</p>.<p>ತಾತ್ಕಾಲಿಕ ಸೇತುವೆ ನಿರ್ಮಿಸಿದ ಜಾಗದಲ್ಲಿ ಕಿರುಸೇತುವೆ ನಿರ್ಮಾಣವಾದರೆ ಚಾರ್ಮಾಡಿಯ ಒಂದು ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.</p>.<p><strong>ವಿಶೇಷ ಉಪನ್ಯಾಸ ನಾಳೆ</strong></p>.<p>ಉಜಿರೆ: ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿ, ಕಾಲೇಜಿನ ಪ್ರಾಂಶುಪಾಲರಾಗಿದ್ದ ದಿ.ಬಿ.ಯಶೋವರ್ಮ ಅವರ ಸ್ಮರಣಾರ್ಥ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಫೆ.20ರಂದು ಬೆಳಿಗ್ಗೆ 11ಗಂಟೆಗೆ ಅರಿವಿನ ದೀವಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>‘ಪರಿಸರ ಸಂರಕ್ಷಣೆ - ಪರ್ಯಾಯ ದಾರಿಗಳು’ ಕುರಿತು ಲೇಖಕ ಶಿರಸಿಯ ಶಿವಾನಂದ ಕಳವೆ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸುವರು ಎಂದು ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಬೋಜಮ್ಮ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ, ಕಾರ್ಯಕ್ರಮದ ಸಂಯೋಜಕ ಪ್ರೊ.ನಾಗಣ್ಣ ಡಿ.ಎ. ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>