ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬೃಜೇಶ್ ಚೌಟ ನಸುಕಿನಲ್ಲಿ ನಗರ ಸುತ್ತಾಟ ನಡೆಸಿ ಮತಯಾಚಿಸಿದರು. ಇಲ್ಲಿನ ಮೀನುಗಾರಿಕಾ ಬಂದರಿಗೆ ಮಂಗಳವಾರ ಭೇಟಿ ನೀಡಿ ಮೀನುಗಾರರೊಂದಿಗೆ ಕೆಲ ಸಮಯ ಕಳೆದರು.
ಬೃಜೇಶ್ ಅವರ ಜೊತೆ ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು. ಬಂದರಿನಲ್ಲಿ ವಿವಿಧ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವಕರ ಜೊತೆಯೂ ಚೌಟ ಮಾತುಕತೆ ನಡೆಸಿದರು.