ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಸರ್ವೆ ಸಂಖ್ಯೆ 123/1ರ ಸರ್ಕಾರಿ ಜಮೀನಿನಲ್ಲಿ ಪ್ರಸ್ತುತ ವಾಸವಾಗಿರುವ ಮುತ್ತುಸ್ವಾಮಿ (78) ಮತ್ತು ಅವರ ಪತ್ನಿ ರಾಧಮ್ಮ (66) ಅವರು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ, ‘ನಾವು ಚಿತ್ರದುರ್ಗದವರಾಗಿದ್ದು, ಕೂಲಿ ಕೆಲಸಕ್ಕಾಗಿ ಆರು ವರ್ಷಗಳ ಹಿಂದೆ ಈ ಪ್ರದೇಶಕ್ಕೆ ಬಂದು ನೆಲೆಸಿದ್ದೇವೆ. ನಾವು ವಾಸಿಸುತ್ತಿರುವ ಸರ್ಕಾರಿ ಜಮೀನಿನ ಸಂಬಂಧ ಬೆಳ್ತಂಗಡಿಯ ವ್ಯಕ್ತಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಮಗೆ ಶೀಘ್ರ ಇಲ್ಲಿಂದ ಜಾಗ ಖಾಲಿ ಮಾಡುವಂತೆ ಕಂದಾಯ ಇಲಾಖೆಯವರು ತಾಕೀತು ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.