ಬದಿಯಡ್ಕ: ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಪಕ್ಕಲ್, ಚೆನ್ನೆಕುಂಡ್ ಪ್ರದೇಶದಲ್ಲಿ ಕಾಡಾನೆಗಳು ಸೋಲಾರ್ ಬೇಲಿ ಮುರಿದು, ಬೆಳೆ ನಾಶ ಮಾಡಿವೆ.
ಬಾಲಕೃಷ್ಣ ನಾಯರ್, ಕಿಟ್ಟು ಅಲಿಯಾಸ್ ಕೃಷ್ಣ ಎಂಬುವರ ಬಾಳೆ, ಅಡಿಕೆ ಹಾಗೂ ತೆಂಗಿನ ಕೃಷಿ ನಾಶವಾಗಿವೆ.
ಕಾರಡ್ಕ ಬ್ಲಾಕ್ ಪಂಚಾಯಿತಿ, ದೇಲಂಪಾಡಿ ಗ್ರಾಮ ಪಂಚಾಯಿತಿಯಿಂದ ಸೋಲಾರ್ ವಿದ್ಯುತ್ ಬೇಲಿಯನ್ನು ಕಳೆದ ವಾರ ನಿರ್ಮಿಸಲಾಗಿತ್ತು. ಸೋಲಾರ್ ಬೇಲಿಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.