ಕುವೈತ್ನಿಂದ ಹಿಂದಿರುಗಲು 500 ಜನ ಅನಿವಾಸಿ ಭಾರತೀಯರಿಗೆ ಇದೇ 9 ರಂದು ಡಿಜಿಸಿಎ ಅನುಮತಿ ನೀಡಿತ್ತು. ಆದರೆ, ವಿಜಯವಾಡಾ, ನವದೆಹಲಿಗೆ ತೆರಳುವ ವಿಮಾನಗಳು ಆಗಲೇ ನಿಗದಿಯಾಗಿದ್ದು, ಮಂಗಳೂರಿಗೆ ಬರುವ ವಿಮಾನದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ಇರುವುದರಿಂದ ಡಿಜಿಸಿಎ ಮತ್ತೊಮ್ಮೆ ಅನುಮತಿ ನಿರಾಕರಿಸಿತ್ತು. ಕೊನೆಗೆ ಆರತಿ ಕೃಷ್ಣ ಅವರು, ಡಿಜಿಸಿಎ ಅಧಿಕಾರಿಗಳ ಜತೆಗೆ ಸುದೀರ್ಘ ಚರ್ಚೆ ನಡೆಸಿದ ನಂತರ, ಇದೇ 12 ರಂದು ಸಂಜೆ 6 ಗಂಟೆಗೆ ಡಿಜಿಸಿಎ ಅನುಮತಿ ದೊರೆಯಿತು.