ಬೆಳ್ಮಣ್ಣು ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜನಾರ್ದನ ಭಟ್ ಬರೆದ ‘ಕರಾವಳಿಯ ಕವಿರಾಜ ಮಾರ್ಗ’ ಹಾಗೂ ನಿಟ್ಟೆ ಪರಿಗಣಿತ ವಿ.ವಿಯ ಮಾನವಿಕ ವಿಭಾಗದ ಡೀನ್ ಡಾ. ಸಾಯಿಗೀತಾ ಹಾಗೂ ಬೆನೆಟ್ ಡಿ. ಅಮ್ಮನ್ನ ಬರೆದ ‘ಮಂಗಳೂರು ಸಮಾಚಾರ ಕಂನಡ ಸಮಾಚಾರ’ ಕೃತಿ ಬಿಡುಗಡೆ ಹಾಗೂ ಕೆ.ಆರ್. ಗೋಪಾಲಕೃಷ್ಣ ಬಳಗದಿಂದ ಸುಗಮ ಸಂಗೀತ ಹಾಗೂ ಶ್ವೇತ ಅರೆಹೊಳೆ ಅವರಿಂದ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಿತು. ವಿವಿ ಹಣಕಾಸು ಅಧಿಕಾರಿ ಪ್ರೊ. ಸಂಗಪ್ಪ, ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಸೋಮಣ್ಣ ಹೊಂಗಳ್ಳಿ, ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಇದ್ದರು.