ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ವಿಚಾರ: ಸಾಂಪ್ರದಾಯಿಕ ಸೌಂದರ್ಯ ಉಳಿಸುವುದು ಉತ್ತಮ–ವೀರೇಂದ್ರ ಹೆಗ್ಗಡೆ

Last Updated 23 ಅಕ್ಟೋಬರ್ 2018, 9:29 IST
ಅಕ್ಷರ ಗಾತ್ರ

ಮಂಗಳೂರು: ಶಬರಿಮಲೆಯ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳುವುದು ಉತ್ತಮ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.‌ವೀರೇಂದ್ರ ಹೆಗ್ಗಡೆ ಹೇಳಿದರು.

ಧರ್ಮಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ' ಶಬರಿಮಲೆಗೆ 48ದಿನ ಬ್ರಹ್ಮಚರ್ಯ ವ್ರತ ಪಾಲಿಸಿ ಭಕ್ತರು ತೆರಳುತ್ತಾರೆ. ಈ ವ್ರತಗಳು ಇರುವುದು ಸಂಯಮಕ್ಕಾಗಿ. ಮನೋನಿಗ್ರಹ ಇಲ್ಲದಿದ್ದರೆ ಅಸಮಾನತೆ ಉಂಟಾಗಬಹುದು. ಸಂಯಮ‌ ಸಡಿಲವಾಗದಂತೆ, ಮೀಟೂ ಪ್ರಕರಣದಂತಹ ಘಟನೆ ನಡೆಯಲು ಅವಕಾಶ ಆಗಬಾರದು. ಅಲ್ಲದೆ ದೇವಸ್ಥಾನದ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳುವುದು ಒಳಿತು ಎಂದು ಅವರು ಹೇಳಿದರು.

ಕೆಲವು ಸಂಪ್ರದಾಯಗಳು ಹಾಗೇಇದ್ದರೆ ಚೆನ್ನ.ಮಹಿಳೆಯರು ಶಬರಿಮಲೆಗೇ ಹೋಗಿ ಪೂಜೆ ಮಾಡಬೇಕಿಲ್ಲ. ವಿದೇಶದಲ್ಲೂ ಈ ರೀತಿಯ ನಿರ್ಬಂಧಗಳಿವೆ. ಹಾಗಂತ ದೇವಸ್ಥಾನಕ್ಕೆ ಹೋದರೆ ಏನೂ ಆಗದು.‌ ಹಳೆ ಪದ್ಧತಿ ಉಳಿಸಿಕೊಳ್ಳುವುದು ಉತ್ತಮ ಎಂಬುದಷ್ಟೆ ತಮ್ಮ ಅಭಿಪ್ರಾಯ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT