ಧರ್ಮಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ' ಶಬರಿಮಲೆಗೆ 48ದಿನ ಬ್ರಹ್ಮಚರ್ಯ ವ್ರತ ಪಾಲಿಸಿ ಭಕ್ತರು ತೆರಳುತ್ತಾರೆ. ಈ ವ್ರತಗಳು ಇರುವುದು ಸಂಯಮಕ್ಕಾಗಿ. ಮನೋನಿಗ್ರಹ ಇಲ್ಲದಿದ್ದರೆ ಅಸಮಾನತೆ ಉಂಟಾಗಬಹುದು. ಸಂಯಮ ಸಡಿಲವಾಗದಂತೆ, ಮೀಟೂ ಪ್ರಕರಣದಂತಹ ಘಟನೆ ನಡೆಯಲು ಅವಕಾಶ ಆಗಬಾರದು. ಅಲ್ಲದೆ ದೇವಸ್ಥಾನದ ಸಾಂಪ್ರದಾಯಿಕ ಸೌಂದರ್ಯ ಉಳಿಸಿಕೊಳ್ಳುವುದು ಒಳಿತು ಎಂದು ಅವರು ಹೇಳಿದರು.