ದೋಣಿಂಜೆಗುತ್ತಿನ ಗಡಿಕಾರ ಪ್ರಮೋದ್ ಕುಮಾರ್ ರೈ ಅವರು ಜ.29ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗುತ್ತಿನ ಚಾವಡಿ ಮನೆ ಹಾಗೂ ಹತ್ತಿರದಲ್ಲಿರುವ ಎರಡು ಕಲ್ಲುರ್ಟಿ ದೈವದ ಸಾನದಿಂದ 2 ಬೆಳ್ಳಿಯ ಹೂಜಿ, 3 ಗಂಟೆ, ದೀಪ ಇಡುವ ಸಾನಾದಿಕೆ (ದೀಪದ ಪರಿಕರ), 2 ಮಣಿ, 1 ಹಿತ್ತಾಳೆ ಕೊಡಪಾನ, 1 ಕರ್ಸಳೆ (ಖಡ್ಗ), 1 ಹಿತ್ತಾಳೆ ಚೆಂಬು, ಆರತಿ ಪರಿಕರ ಕಳ್ಳತನವಾಗಿದೆ. ಜ.28ರಂದು ಬೆಳಿಗ್ಗೆ ಚಾವಡಿ ಮನೆಯಲ್ಲಿ ದೀಪ ಇಡಲು ಹೋದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.