ಬದಿಯಡ್ಕ: ಇಲ್ಲಿಗೆ ಸಮೀಪದ ಮುಗು ಕುಂಞಪದವು ಸ್ವಾತಿ ಮಂಜುನಾಥ ರೈ ಎಂಬವರ ಮನೆಯಿಂದ ಸುಮಾರು ₹8 ಲಕ್ಷ ಮೌಲ್ಯದ 23 ಪವನ್ ಚಿನ್ನಾಭರಣ ಮಂಗಳವಾರ ಕಳವಾಗಿದೆ. ಮನೆಯ ಸದಸ್ಯರು ಮುಗು ಕ್ಷೇತ್ರದ ಕಿರುಷಷ್ಠಿ ಉತ್ಸವಕ್ಕೆ ತೆರಳಿದಾಗ ಘಟನೆ ನಡೆದಿದೆ. ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ ಒಡವೆಗಳನ್ನು ಕದ್ದೊಯ್ದಿದ್ದಾರೆ. ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.