2015ರಲ್ಲಿ ಬಂಟ್ವಾಳ ತಾಲ್ಲೂಕು ಸಜಿಪ ಮೂಡ ಗ್ರಾಮದ ಕೊಳಕೆಯಲ್ಲಿ ನಡೆದ ಮೊಹಮ್ಮದ್ ನಾಸಿರ್ ಎಂಬವರನ್ನು ಕೊಲೆ ಮಾಡಿದ ವಿಜೇತ್ ಕುಮಾರ್ (22), ಕಿರಣ್ ಪೂಜಾರಿ (24), ಅನೀಶ್ (23) ಮತ್ತು ಅಭಿ (24) ದೋಷಿಗಳು ಎಂದು ಸಾಬೀತಾಗಿದೆ. 2016ರಲ್ಲಿ ಉಳ್ಳಾಲ ಗ್ರಾಮದ ಕೋಟೆಪುರದಲ್ಲಿ ರಾಜೇಶ್ ಕೋಟ್ಯಾನ್ ಅವರ ಹತ್ಯೆ ಮಾಡಿದ ಮೊಹಮ್ಮದ್ ಆಸಿಫ್ (23), ಮೊಹಮ್ಮದ್ ಸುಹೈಲ್ (20), ಅಬ್ದುಲ್ ಮುತಾಲಿಕ್ (20) ಮತ್ತು ಅಬ್ದುಲ್ ಅಸ್ಫೀರ್ (19) ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.