ಕುಕ್ಕೆ ಕ್ಷೇತ್ರವನ್ನು ಈ ಹಿಂದಿನಂತೆ ಹಸಿರಿನಿಂದ ಸಮೃದ್ಧವಾಗಿ ಕಂಗೊಳಿಸುವಂತೆ ಮಾಡಲು ದೇವಸ್ಥಾನದ ವತಿಯಿಂದ ಬೃಹತ್ ವನಸಂವರ್ಧನಾ ಕಾರ್ಯಕ್ರಮಕ್ಕೆ 2022ರಲ್ಲಿ ಚಾಲನೆ ನೀಡಲಾಗಿತ್ತು. ಗಿಡಗಳ ರಕ್ಷಣೆಗೂ ತಡೆಬೇಲಿ ನಿರ್ಮಿಸಿದ್ದು, ಗೊಬ್ಬರ ಹಾಕಿ ಪೋಷಿಸಲಾಗುತ್ತಿದೆ. ನೇರಳೆ, ಪನ್ನೇರಳೆ, ಕೆಂಡಸಂಪಿಗೆ, ರೆಂಜ, ರಂಬೂಟನ್, ಕೋಳಿಜುಟ್ಟು, ಬಟರ್ಫ್ರೂಟ್, ಕಹಿಬೇವು, ಬಿಲ್ವಪತ್ರೆ, ಸೀತಾ ಅಶೋಕ, ಸ್ಟಾರ್ ಆ್ಯಪಲ್, ಪೇರಳೆ, ಕುಂಟನೇರಳೆ, ಪುನರ್ಪುಳಿ, ಅರ್ತಿ, ಗಂಧ, ಬಾದಾಮಿ, ನೆಲ್ಲಿ, ಸೊರಗೆ, ಕದಂಬ, ಕಕ್ಕೆ, ಜಮ್ಮುನೆರಳೆ, ಹುಣಸೆ, ಪಾಲಶ, ನಾಗಲಿಂಗ ಪುಷ್ಪ, ನಾಗಸಂಪಿಗೆ, ಮಾವು, ಪೇರಳೆ, ರಾಮಫಲ, ಹಲಸು, ಚಕೋತ, ಔಷಧೀಯ ಗಿಡಗಳಾದ ಕುಟಜ, ಸ್ತ್ರೀಕುಟಜ, ಮೈನೇರಳೆ, ಅಂಕೋಡಿ, ಭವ್ಯ, ಲಕ್ಷ್ಮಣ ಫಲ, ಪಾರೀಷ, ರೋಹಿತಕ್, ವಾತಪೋತ, ಅಗ್ನಿಮಂಥ, ಮುಟುಕುಂದ, ಏಕನಾಯಕ, ಪುತ್ರಂಜೀವ, ನಾಗಕೆಸರ, ಗುಳಿಮಾವು, ಶಿವನಿ, ಹಲಸು, ಪೇರಳೆ, ಚಿಕ್ಕು, ಮಾವು, ನೇರಳೆ, ಹತ್ತಿ ಹಾಗೂ ನಾಗನಿಗೆ ಸಂಬಂಧಿಸಿದ ಪತ್ರಬಿಂಬ ಗಿಡಗಳನ್ನು ನೆಡಲಾಗಿದೆ.