ಮೂಡುಬಿದಿರೆ: ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಭಾರತೀಯ ಗೋಪರಿವಾರದ ಗೋಕಿಂಕರ ನೇತೃತ್ವದಲ್ಲಿ ‘ಅಭಯಾಕ್ಷರ ಅಭಿಯಾನ’ ನೆರವೇರಿತು. ಭಾರತೀಯ ಗೋತಳಿ ರಕ್ಷಣೆಗಾಗಿ ಸಹಿ ಸಂಗ್ರಹಕ್ಕೆ ಒಂದು ಮಳಿಗೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಟ್ಟಡದಲ್ಲಿ ತೆರೆಯಲಾಗಿತ್ತು.
ಮತ್ತೊಂದು ಮಳಿಗೆಯನ್ನು ಕೃಷಿಸಿರಿಯಲ್ಲಿ ತೆರೆಯಲಾಗಿತ್ತು. ಭಾರತೀಯ ಗೋವಂಶದ ಕಾಂಕ್ರೇಜ್ ತಳಿಯ ಎತ್ತರದ ಎತ್ತುಗಳ ನಡುವೆಯೇ ನಿಂತು ಸಹಿ ಸಂಗ್ರಹಿಸಿದ್ದು ಗಮನ ಸೆಳೆಯಿತು.
ಸುಮಾರು 25ಕಾರ್ಯಕರ್ತರಿಂದ ಆರಂಭಗೊಂಡ ಅಭಿಯಾನ ಮೂರು ದಿನವೂ ನಡೆಯಿತು. ಹೊಸನಗರ ರಾಮಚಂದ್ರಾಪುರ ಮಠದ ಅಂಗಸಂಸ್ಥೆ ಯಾದ ನಂತೂರಿನ ಶ್ರೀ ಭಾರತೀ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಗೋಕಿಂಕರರು ಈ ಅಭಿಯಾ