ಸುಬ್ರಹ್ಮಣ್ಯ: ಶಿಕ್ಷಣ ಸಂಸ್ಥೆಯೊಂದು ಜ್ಞಾನಾರ್ಜನೆಯೊಂದಿಗೆ ಬಾಲ್ಯದಲ್ಲೇ ಮಕ್ಕಳಲ್ಲಿ ಗೋರಕ್ಷಣೆ, ಹೈನುಗಾರಿಕೆ, ಪಶುಪಾಲನೆಯ ಮಹತ್ವದ ಕುರಿತು ತಿಳಿವಳಿಕೆ ಮೂಡಿಸುವ ವಿನೂತನ ಪ್ರಯತ್ನದಲ್ಲಿ ತೊಡಗಿದೆ. ಶಿಕ್ಷಣ ಸಂಸ್ಥೆ ಜೊತೆ ಗೋವು ಸಾಕುವ ಕಾರ್ಯದಲ್ಲಿ ತೊಡಗಿ ಗೋ ಶಾಲೆ ನಿರ್ಮಿಸಿರುವುದನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಾಣಬಹುದು.