2021ರ ಆಗಸ್ಟ್ 28ರಂದು ಮದ್ಯಪಾನದ ಚಟ ಬಿಡು, ಗಿರವಿ ಇಟ್ಟಿರುವ ಬಂಗಾರದ ಆಭರಣಗಳನ್ನು ತಂದುಕೊಡು ಎಂದು ಶಿಲ್ಪಾ ಅವರು ಗಿರೀಶನಿಗೆ ಬುದ್ಧಿವಾದ ಹೇಳಿದರು. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆ ನಡೆದು ಹಗ್ಗದಿಂದ ಬೆಡ್ ರೂಮ್ನ ಚಾವಣಿಯ ಮರದ ತೊಲೆಗೆ ಹಗ್ಗ ಹಾಕಿದ ಗಿರೀಶ ಒಂದು ತುದಿಯನ್ನು ಶಿಲ್ಪಾ ಅವರ ಕುತ್ತಿಗೆಗೆ ಕಟ್ಟಿ ಎಳೆದು ಕೊಲೆ ಮಾಡಿದ್ದ.