‘ಪಕ್ಷೇತರವಾಗಿ ಸ್ಪರ್ಧಿಸಿ ಗೆಲ್ಲುವುದು ಕಷ್ಟ. ಮುಂದೆ ಅವಕಾಶಗಳು ಇದ್ದು, ನಿಮ್ಮನ್ನು ಬೆಳೆಸುತ್ತೇವೆ. ಸ್ಪರ್ಧಿಸುವ ಇಚ್ಛೆ ಇದ್ದರೆ ಸ್ಪರ್ಧಿಸಿ, ನಿಮ್ಮ ವಿವೇಚನಗೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ಹೇಳಿದರು. ನಾನು ಸ್ಪರ್ಧಿಸಬೇಕು ಎಂದು ಲಕ್ಷಾಂತರ ಜನರು ಬಯಸುತ್ತಿದ್ದಾರೆ. ಸ್ಪರ್ಧಿಸಿದರೆ ಗೆಲ್ಲುವ ಅವಕಾಶವಿದೆ. ಟಿಕೆಟ್ ಬದಲಾವಣೆ ಮಾಡಿ ನನಗೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದು ವಿನಯ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.