ಗ್ರಾಮದಲ್ಲಿ ಇನ್ನೆರೆಡು ತಿಂಗಳ ನಂತರ ಮಾರಮ್ಮನ ಜಾತ್ರೆ ನಡೆಯಲಿದ್ದು, ಈ ಹಂತದಲ್ಲಿ ಗ್ರಾಮಸ್ಥರು ಮತ್ತು ಸಹಕಾರ ಸಂಘದಲ್ಲಿ ಒಡಕು ಮೂಡುವುದು ಬೇಡ. ಚುನಾವಣೆಗೆ ಯಾವ ಪ್ರತಿನಿಧಿಯನ್ನೂ ಆಯ್ಕೆ ಮಾಡುವುದು ಬೇಡ ಎಂದು ಗ್ರಾಮದ ಕೆಲವರ ಗುಂಪು ಸಂಘದ ಕಚೇರಿ ಎದುರು ಜಮಾಯಿಸಿ ಆಗ್ರಹಿಸಿದರು. ಇದರಿಂದ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು.