ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಮಾತನಾಡಿ, ‘ಮೇ 7ರಂದು ತಪ್ಪದೇ ಎಲ್ಲರೂ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ದೇಶದ ಪ್ರಜಾಪ್ರಭುತ್ವಕ್ಕೆ ಹೆಚ್ಚು ಶಕ್ತಿಯನ್ನು ತುಂಬಬೇಕಾಗಿದೆ. ನೀವು ಮತದಾನ ಮಾಡಿ ನಿಮ್ಮ ಕುಟುಂಬ, ನೆರೆಹೊರೆ, ವಾರ್ಡ್, ಗ್ರಾಮದ ಜನರನ್ನು ಉತ್ತೇಜಿಸಿ ಮತದಾನ ಹೆಚ್ಚಿಸಲು ಶ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.