ಈ ವರ್ಷ ಅಧಿಕ ಮಳೆಯಿಂದ ಅಡಿಕೆ ಇಳುವರಿ ತುಂಬಾ ಕಡಿಮೆಯಾಗಿದ್ದು, ಕೆಲವು ಗಿಡಗಳಲ್ಲಿ ಶೇಕಡ 50ರಷ್ಟು ಎಳೆ ಅಡಿಕೆ ಹರಳು ಉದುರಿ ಹೋಗಿವೆ. ಎಕರೆಗೆ ಸರಾಸರಿ ಎಂಟರಿಂದ ಹತ್ತು ಕ್ವಿಂಟಲ್ ಅಡಿಕೆ ಇಳುವರಿ ಬರುತ್ತಿತ್ತು. ಈ ವರ್ಷ ಎಕರೆಗೆ ನಾಲ್ಕರಿಂದ ಐದು ಕ್ವಿಂಟಲ್ ಅಡಿಕೆ ಬಂದರೆ ಹೆಚ್ಚು. ಇಡೀ ವರ್ಷ ಅಡಿಕೆ ಗಿಡಗಳ ನಿರ್ವಹಣೆ, ಕೊಯಿಲು, ಸಾಗಾಣಿಕೆ, ಸುಲಿದು ಬೇಯಿಸಿ ಒಣಗಿಸಿ, ಗುಣಮಟ್ಟಕ್ಕೆ ತಕ್ಕಂತೆ ಬೇರ್ಪಡಿಸುವ ಕಾರ್ಯಕ್ಕೆ ಸಾಕಷ್ಟು ವೆಚ್ಚವಾಗುತ್ತಿದ್ದು, ಈ ವರ್ಷ ಅಡಿಕೆ ಬೆಳೆಗಾರರು ನಿಜಕ್ಕೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆ. ರುದ್ರಪ್ಪ ಬೇಸರ ವ್ಯಕ್ತಪಡಿಸಿದರು.