ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ಕೆಂಚಮ್ಮ ದೇವಸ್ಥಾನದ ಗರ್ಭಗುಡಿಯ ಬಾಗಿಲ ಬೀಗ ಒಡೆದು ದೇವಸ್ಥಾನದ ಒಳಗೆ ನುಗ್ಗಿ ದೇವಿಯ ಮೂರ್ತಿಗೆ ಹಾಕಿದ್ದ 20 ಗ್ರಾಂ. ಮಾಂಗಲ್ಯದ ಸರ ಹಾಗೂ 2 ಕೆ.ಜಿ. ತೂಕದ ಬೆಳ್ಳಿ ಕೀರೀಟ ಮತ್ತು ಹುಂಡಿಯಲ್ಲಿದ್ದ ಹಣ ಸೇರಿ ಒಟ್ಟು ₹ 1.45 ಲಕ್ಷ ಮೌಲ್ಯದ ಆಭರಣಗಳನ್ನು ಕಳವು ಮಾಡಿದ್ದಾರೆ.