ಸಾಹಿತಿ ಸಂಗನಾಳ ಮಠ ಅವರು ಕನ್ನಡ ಭಾಷೆಯ ವೈಶಿಷ್ಟ್ಯತೆ ಮತ್ತು ಚರಿತ್ರೆಯನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ದೊಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಪಿ.ಎಂ. ಷಣ್ಮುಖಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಂ. ಮಂಜಪ್ಪ, ಕನ್ನಡ ವಿಭಾಗದ ಮುಖ್ಯಸ್ಥರಾದ ಕೆ. ನಾಗೇಶ, ಕೆ. ರುದ್ರಪ್ಪ, ರೇವಣಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ಎನ್ ನರಗಟ್ಟಿ ಉಪಸ್ಥಿತರಿದ್ದರು.