ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ‘ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಹಸಿರೆಲೆ ಗೊಬ್ಬರದ ಬಳಕೆಯಿಂದ ನೆಲದ ಫಲವತ್ತತೆ ಸ್ಥಿರೀಕರಣವಾಗುತ್ತದೆ. ಕಳೆನಾಶಕ ತಯಾರಿಕೆಗೆ 25 ಸಾವಿರ ಟನ್ ಯೂರಿಯಾ ಬಳಕೆಯಾಗುತ್ತದೆ. ಭತ್ತ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಲ್ಲಿ ಸೇರದ ಕಾರಣ ಸಹಾಯಧನ ಸಿಗುವುದಿಲ್ಲ. ವಿಶೇಷ ಪ್ರಸ್ತಾವ ಸಲ್ಲಿಸಿ, ಸಹಾಯಧನ ಒದಗಿಸಲು ಯತ್ನಿಸುವೆ’ ಎಂದು ಹೇಳಿದರು.