‘ಪ್ರತಿ ವರ್ಷ ಯುಗಾದಿಯಂದು ನಡೆಯುವ ಗಡ್ಡೆ ರಾಮೇಶ್ವರ ರಥೋತ್ಸವಕ್ಕೆ ಮೂರು ದಶಕಗಳಿಂದ ಬರುತ್ತಿದ್ದೇವೆ. ನಮ್ಮ ತಾಯಿಯವರಿಗೆ ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ದುರ್ಗಾದೇವಿಗೆ ಹರಕೆ ಹೊತ್ತಿದ್ದರಿಂದ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತು. ವ್ಯಾಪಾರ, ವ್ಯವಹಾರಗಳು ಚೆನ್ನಾಗಿ ನಡೆಯುತ್ತಿದೆ. ಹಾಗಾಗಿ ಪ್ರತಿವರ್ಷ ದೇವಿಗೆ ಬೆಳ್ಳಿ ತೊಟ್ಟಿಲು, ತಾಳಿ, ಕಣ್ಣುಗಳನ್ನು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದೇವೆ’ ಎಂದು ಸಿದ್ಲಿಪುರ ಗ್ರಾಮದ ಭಕ್ತ ಆರಿಫ್ ಉಲ್ಲಾ, ಅವರ ತಾಯಿ ಪ್ಯಾರಿಜಾನ್ ಮತ್ತು ಕುಟುಂಬದವರು ತಿಳಿಸಿದರು.