ನ್ಯಾಮತಿ: ಸಮೀಪದ ಹಳೆಮಳಲಿ ಗ್ರಾಮದ ಕೆರೆಯ ಬಳಿ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ನಿಯಂತ್ರಣಕ್ಕೆ ಬಾರದೆ ಬಿದ್ದು ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಶಿವಮೊಗ್ಗ ತಾಲ್ಲೂಕು ಬೇಡರ ಹೊಸೂರು ಗ್ರಾಮದ ಎಚ್.ಎಂ.ಚಂದ್ರಶೇಖರ ಮೃತರು.
ಹಳೆಮಳಲಿ ಗ್ರಾಮದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮ ನೋಡಿಕೊಂಡು ಊರಿಗೆ ಮರಳುವಾಗ ಅಪಘಾತವಾಗಿದೆ. ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತನ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.