ಹರಿಹರ: ತುರ್ತು ಕಾಮಗಾರಿ ಪ್ರಯುಕ್ತ ಜುಲೈ 15ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸ್ಥಳಗಳು: ಜೆ.ಸಿ. ಬಡಾವಣೆಯ 1ರಿಂದ 5ನೇ ಮುಖ್ಯ ರಸ್ತೆ, ಪ್ರಶಾಂತ ನಗರ, ರಾಜರಾಮ್ ಕಾಲೊನಿ, ವಿಆರ್ಎಲ್ ಕಚೇರಿ, ಬೆಂಕಿನಗರ, ನೀಲಕಂಠ ನಗರ, 1ನೇ ರೈಲ್ವೆ ಗೇಟ್, ಜ್ಯೋತಿರ್ಮಠ, ಪಿ.ಬಿ. ರಸ್ತೆ, ಡಿಜಿಆರ್ ಅಮ್ಯೂಸ್ಮೆಂಟ್ ಪಾರ್ಕ್, ಕಾಳಿದಾಸನಗರ, ಗಂಗಪ್ಪ ವಠಾರ, ರಾಮ ಮಂದಿರ ಹಾಗೂ ಸುತ್ತಲಿನ ಪ್ರದೇಶಗಳು.