ಜಗಳೂರು: ತಾಲ್ಲೂಕಿನ ಮುಸ್ಟೂರು ಗ್ರಾಮದ ಮುಸ್ಟೂರೇಶ್ವರ ದೇವಸ್ಥಾನದ ಹೊರ ಮಠದಲ್ಲಿರುವ ಶಿಲ್ಪಗಳನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಭಗ್ನಗೊಳಿಸಿದ್ದಾರೆ.
ಮುಸ್ಟೂರೇಶ್ವರ ಸ್ವಾಮಿ ಹಾಗೂ ಇತರ ದೇವರ ಶಿಲ್ಪಗಳ ಅಂಗಾಂಗಗಳನ್ನು ತುಂಡರಿಸಿ ವಿರೂಪಗೊಳಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಕಿಡಿಗೇಡಿಗಳು ಇದೇ ರೀತಿ ಶಿಲ್ಪಗಳನ್ನು ವಿರೂಪಗೊಳಿಸಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮದ ಮುಖಂಡರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.