ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ಜಾತ್ರೆಯ ಪ್ರಯುಕ್ತ ದಾವಣಗೆರೆ ದೇವರಾಜ ಅರಸ್ ಬಡಾವಣೆ, “ಬಿ” ಬ್ಲಾಕ್ ನಲ್ಲಿರುವ ಸಾರ್ವಜನಿಕ ಆಟದ ಮೈದಾನದಲ್ಲಿ ಕುರಿಕಾಳಗ ಆಯೋಜಿಸಿರುವುದಕ್ಕೆ ದುರ್ಗಾಂಬಿಕಾ ದೇವಸ್ಥಾನ ಧರ್ಮದರ್ಶಿಗಳ ಟ್ರಸ್ಟ್, ಕುರಿ ಕಾಳಗದ ಸಮಿತಿಯ ಆಯೋಜಕರ ವಿರುದ್ಧ ಬಸವನಗರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.