ಈ ವೇಳೆ ಮಾತನಾಡಿದ ಅಶ್ವತ್, ‘ನಾನು ರೈತನ ಮಗ. ನಿಮ್ಮ ಕಷ್ಟ ಅರ್ಥ ಅಗುತ್ತದೆ. ಆದರೆ, ಮೇಲಧಿಕಾರಿಗಳ ಆದೇಶ ಪಾಲಿಸಬೇಕಿದೆ. ಜನರಿಗೆ ಕುಡಿಯಲು ನೀರಿಲ್ಲದೆ ಸಾಯುವಂತಾಗಿದೆ. ಅವರಿಗೆ ನೀರು ಒದಗಿಸುವ ಜವಾಬ್ದಾರಿ ಇದೆ. ಇದಕ್ಕಾಗಿ ಪಂಪ್ಸೆಟ್ ತೆರವುಗೊಳಿಸಿ, ಇಲ್ಲವಾದಲ್ಲಿ ಹೆಚ್ಚಿನ ಫೋರ್ಸ್ ಕರೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.