ಹಸಿರೆಲೆ ಗೊಬ್ಬರ ಬೆಳೆಗಳಾದ ಡಯಾಂಚ, ಸೆಣಬು, ಅಲಸಂದೆ, ಹುರುಳಿ, ಗ್ಲಿರಿಸಿಡಿಯಾ, ಹೊಂಗೆಎಲೆಗಳು ಮಣ್ಣಿನ ಸಾರವನ್ನು ಹೆಚ್ಚಿಸುತ್ತವೆ. ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಂಶಗಳು ಈ ಗೊಬ್ಬರದಿಂದ ಭೂಮಿಗೆ ಸೇರುತ್ತವೆ. ಈ ಗಿಡಗಳ ಎಲೆ, ಕಾಂಡ ಹಸಿರಾಗಿರುವಾಗಲೇ ಮಣ್ಣಿಗೆ ಸೇರಿಸುವುದು ಅತ್ಯವಶ್ಯಕ ಎಂದು ಅವರು ತಿಳಿಸಿದ್ದಾರೆ.