ಇಲ್ಲಿನ ಗಬ್ಬೂರು ಕ್ರಾಸ್ ಬಳಿ ಶುಕ್ರವಾರ ಪುಣೆ–ಬೆಂಗಳೂರು ಹೆದ್ದಾರಿ ತಡೆದು, ಇಷ್ಟಲಿಂಗ ಪೂಜೆ ನೆರವೇರಿಸಿ ಪ್ರತಿಭಟನೆ ಮಾಡಿದ ಅವರು, ‘ಮೂರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ತೆರಳಿ ಇಷ್ಟಲಿಂಗ ಪೂಜೆಮಾಡಿ, ಪ್ರತಿಭಟಿಸುತ್ತೇವೆ’ ಎಂದರು.