‘ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅವಮಾನ ಅನುಭವಿಸಿ ಬೇಸರವಾಗಿ ಸ್ವಯಂ ನಿವೃತ್ತಿ ತೆಗೆದುಕೊಂಡೆ. ನಂತರ ಸಿನಿಮಾ ಪತ್ರಕರ್ತೆಯಾದೆ. ಚಿತ್ರರಂಗ ಸಹ ಪ್ರೋತ್ಸಾಹ ನೀಡಿತು’ ಎಂದು ಹೇಳಿದರು. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷೆ ಸುನಂದಾ ಕಡಮೆ, ಕೋಶಾಧ್ಯಕ್ಷೆ ಡಾ. ಪ್ರಜ್ಞಾ ಮತ್ತಿಹಳ್ಳಿ, ಸರಸ್ವತಿ ಬೋಸಲೆ, ಕಾರ್ಯದರ್ಶಿ ಲಲಿತಾ ಪಾಟೀಲ ಇದ್ದರು.