ಹುಬ್ಬಳ್ಳಿ: ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿದ್ದ ಜಾಗದ ಅತಿಕ್ರಮಣ ತೆರವು ಕಾರ್ಯಾಚರಣೆ ಹು–ಧಾ ಮಹಾನಗರ ಪಾಲಿಕೆಯಿಂದ ಶುಕ್ರವಾರ ನಡೆಯಿತು.
ಉಣಕಲ್ ಕ್ರಾಸ್ನಿಂದ ಸಾಯಿನಗರ ಸರ್ಕಲ್ ಮತ್ತು ಉಣಕಲ್ ಚರ್ಚ್ವರೆಗೆ 18 ಮೀ. ರಸ್ತೆ ವಿಸ್ತರಣೆಗಾಗಿ ಈವರೆಗೆ 55 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮಾಲೀಕರಿಗೆ ₹3.20 ಕೋಟಿ ಪರಿಹಾರ ನೀಡಲಾಗಿದೆ. ಆದರೂ, ಕೆಲವರು ಕಟ್ಟಡ, ಅಂಗಡಿ, ಕಾಂಪೌಂಡ್ ತೆರವುಗೊಳಿಸಿರಲಿಲ್ಲ. ಪಾಲಿಕೆ ವಲಯ ಕಚೇರಿ–5ರ ಸಿಬ್ಬಂದಿ, ಪೊಲೀಸರ ನೆರವಿನೊಂದಿಗೆ ಜೆಸಿಬಿ ಮೂಲಕ ಇವುಗಳನ್ನು ತೆರವುಗೊಳಿಸಲಾಯಿತು.
ಒಟ್ಟು 3,985.75 ಚ.ಮೀ. ವ್ಯಾಪ್ತಿಯ 160 ಆಸ್ತಿಗಳ ಭೂಸ್ವಾಧೀನಕ್ಕೆ ಪಟ್ಟಿ ಮಾಡಲಾಗಿದ್ದು, ₹9.37 ಕೋಟಿ ಪರಿಹಾರಧನ ನೀಡಲು ಅಂದಾಜಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.
ಪಾಲಿಕೆ ವಲಯ–5ರ ಅಭಿವೃದ್ದಿ ಅಧಿಕಾರಿ ಶರಣ ಬಸಪ್ಪ ಕೆಂಭಾವಿ, ವಲಯ ಆಯುಕ್ತ ಗಿರೀಶ ತಳವಾರ, ಎಂಜಿನಿಯರ್ ರಾಥೋಡ, ಅಭಿಷೇಕ, ಮಂಜುನಾಥ, ಕಂದಾಯ ನಿರೀಕ್ಷಕ ಪಮಾಡಿ, ರವಿ, ಈಶ್ವರ್ ಇದ್ದರು.