ಬ್ರಹ್ಮಚೈತನ್ಯ ಮಹಾರಾಜ ಹಾಗೂ ಬ್ರಹ್ಮರಾಜರ ಮಹಾರಾಜರ ಪಾದುಕೆಗಳನ್ನು ಶತಮಾನೋತ್ಸವ ಮಂಟಪದ ತನಕ ಶೋಭಾಯಾತ್ರೆಯ ಮೂಲಕ ತೆಗೆದುಕೊಂಡು ಹೋಗಲಾಯಿತು. ಪಲ್ಲಕ್ಕಿ ಮೆರವಣಿಗೆ, ಕೋಠಿಪೂಜೆ, ಭಾವೂಸಾಹೇಬ ಉಪಾಸನಾ ಮಂಟಪದಲ್ಲಿ ಕಾಕಡಾರತಿ, ಪಂಚಪದೀ ಭಜನೆ, ಅಭಿಷೇಕ, ಪೂಜೆ, ಮಹಾಮಂಗಳಾರತಿ ನಡೆದವು. 13 ಗಂಟೆಗಳ ನಿರಂತರ ಭಜನೆ ಮತ್ತು ಅಖಂಡ ನಾಮಸ್ಮರಣೆ ಕೂಡ ಆರಂಭವಾಯಿತು. ರಾಮನಾಮ ಜಪದ ಸಂಕಲ್ಪವನ್ನು ಬ್ರಹ್ಮಾನಂದ ಮಹಾರಾಜರಿಗೆ ಅರ್ಪಿಸುವ ಕಾರ್ಯಕ್ರಮ ಕೂಡ ಜರುಗಲಿದೆ.