ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಸಾಮಾನ್ಯ ಭೇಟಿಯಾಗಿದೆ. ಜನಸ್ನೇಹಿ ಪೊಲೀಸ್ ಠಾಣೆ ಯೋಜನೆ ನಿಜವಾಗಿಯೂ ಅನುಷ್ಠಾನ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿದ್ದೇನೆ. ದೂರು ನೀಡಲು ಬಂದಿದ್ದ ಜನರನ್ನು ಮಾತನಾಡಿಸಿ, ಪೊಲೀಸರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಬಗ್ಗೆ ಚರ್ಚಿಸಿದೆ. ಪೊಲೀಸರು ಕೆಲಸ ಮಾಡಿಕೊಟ್ಟಿದ್ದಾರೆ ಎಂಬುದನ್ನು ಜನರು ಹೇಳಿದ್ದಾರೆ’ ಎಂದರು.