ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಮಲೆನಾಡಿನ ಯಜಮಾನಿಕೆ, ಶ್ರೀಮಂತಿಕೆಯನ್ನು ಅಲ್ಲಿನ ಮೂಢನಂಬಿಕೆ, ಅಲ್ಲಿರುವ ಹೊಟ್ಟೆಬಾಕರ ಅನೇಕ ಹುಳುಕನ್ನು ತಮ್ಮ ಕಾವ್ಯದಲ್ಲಿ ತೋರಿಸಿಕೊಟ್ಟವರು ಕುವೆಂಪು. ಹೆಣ್ಣಿನ ಬಗೆಗೆ, ಪರಿಸರದ ಕಾಳಜಿ, ಅಲ್ಲಿನ ಧೋರಣೆ, ಕಂದಾಚಾರ, ಇನ್ನಿತರ ಅನೇಕ ವಿಚಾರಗಳನ್ನು ತಮ್ಮ ಕಾವ್ಯದ ಮೂಲಕ ಜನರ ಕಣ್ಣು ತೆರೆಸುವ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಹೇಳಿದರು.