ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ’ನ.25ರಂದು ಸಂಜೆ 5.45ಕ್ಕೆ ಕನ್ನಡ ಪ್ರೇಮಿ ಆನಂದ ಕಮತಗಿ ಅವರು ನುಡಿ ಹಬ್ಬ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಕಲಾ ಕೃಷಿ ಬಳಗದ ಅಧ್ಯಕ್ಷ ಕೆ.ಸಿ.ಪಾಟೀಲ ಅಧ್ಯಕ್ಷತೆ ವಹಿಸುವರು. ಹಾಸ್ಯ ಭಾಷಣಕಾರರಾದ ಸುಧಾ ಬರಗೂರು, ಚಿತ್ರನಟ ರಾಮಕೃಷ್ಣ ನೀರನಳ್ಳಿ, ಎಚ್.ವಿ.ಬೆಳಗಲಿ ಹಾಗೂ ನುಡಿ ಹಬ್ಬ ಸಂಘಟನಾ ಸಮಿತಿ ಅಧ್ಯಕ್ಷ ಸಿ.ಕ.ಮಾಲಿಪಾಟೀಲ ಭಾಗವಹಿಸುವರು’ ಎಂದು ತಿಳಿಸಿದರು.