ಕುಂದಗೋಳ: ‘ಕೌಶಲಗಳನ್ನು ಹೊಂದಿದ ಒಬ್ಬ ಅವಿದ್ಯಾವಂತ ನೂರು ಕೌಶಲ ರಹಿತ ವಿದ್ಯಾವಂತರಿಗಿಂತ ಉತ್ತಮ. ಇಂದಿನ ಆಧುನಿಕ ಜಗತ್ತಿನಲ್ಲಿ ಕೌಶಲಗಳಿಲ್ಲದ ಮನುಷ್ಯನಿಗೆ ಬೆಲೆಯಿಲ್ಲ’ ಎಂದು ಜಿ.ಎಸ್ ಪಾಟೀಲ ಕಾಲೇಜಿನ ಪ್ರಾಚಾರ್ಯ ಪ್ರೊ.ಜೆ.ಎನ್ ಅರಿಕಟ್ಟಿ ಹೇಳಿದರು.
ಪಟ್ಟಣದ ಜೆ.ಎಸ್.ಎಸ್ ವಿದ್ಯಾಪೀಠದ ಜಿ.ಎಸ್ ಪಾಟೀಲ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಶುಕ್ರವಾರ ನಡೆದ ‘ಪದವಿ ನಂತರ ಉದ್ಯೋಗವಕಾಶ ಮತ್ತು ಕೌಶಲ ಅಭಿವೃದ್ಧಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂತೋಷ ಮತ್ತು ಹಿದಿಯತ್, ಜೆ.ಎಸ್.ಎಸ್ ವಿದ್ಯಾಪೀಠದ ಕಾರ್ಯದರ್ಶಿ ವೈ.ಎಸ್ ಮೇಗುಂಡಿ, ಪ್ರೊ.ಟಿ.ಎ ಚಿತ್ತರಗಿ, ಪ್ರೊ. ಎಂ.ಎಂ ಬುಡಶೆಟ್ಟಿ, ಎಸ್.ಎಸ್ ಪಾಟೀಲ, ಎ.ವೈ ಭಜಂತ್ರಿ, ಎಂ.ಜಿ ನಧಾಪ, ಎಂ.ಎಸ್ ಬ್ಯಾಳ್ಯಾಳ, ವಿದ್ಯಾ ಇದ್ದರು.