ಅಣ್ಣಿಗೇರಿ: ಇಂದಿನ ದಿನಮಾನಗಳಲ್ಲಿ ಸಂತ ಮಹಾತ್ಮರ ಜೀವನ ಚರಿತ್ರೆಯ ವಿಷಯವನ್ನು ನಾಟಕ ಹಾಗೂ ಪುಸ್ತಕಗಳ ಮೂಲಕ ಮಾತ್ರ ತಿಳಿಯಲು ಸಾಧ್ಯ ಎಂದು ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ಸೋಮವಾರ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘದಿಂದ ಹಮ್ಮಿಕೊಂಡ ಸಂತ ಶಿಶುನಾಳ ಶರೀಫರ ಜೀವನಚರಿತ್ರೆಯ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಇಂದು ತಂತ್ರಜ್ಞಾನ ಮತ್ತು ಅಂತರ್ಜಾಲದ ಸವಲತ್ತು ಹೆಚ್ಚಾಗಿದ್ದರಿಂದ ಕಲಾವಿದರ ಬದುಕು ಬಹಳ ಕಷ್ಟಕರವಾಗಿದೆ’ ಎಂದರು.