‘ಬೆಂಗಳೂರಿನಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಇಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಸಂಚಾರ ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಮೊದಲ ಹಂತದಲ್ಲಿ 56 ಮಂದಿ ತಂಡ ರಚಿಸಲಾಗಿದೆ. ಅಪಘಾತ ನಿಯಂತ್ರಣ ಹಾಗೂ ಸಂಚಾರ ಸುರಕ್ಷತೆ ಬಗ್ಗೆ ಸವಾರರಿಗೆ ಸಂದೇಶ ಸಾರುವ ಜವಾಬ್ದಾರಿ ನೀಡಲಾಗಿದೆ. ತಮಗೆ ಅನುಕೂಲವಾದ ದಿನ ಹಾಗೂ ಸಮಯದಲ್ಲಿ ಬಂದು ಕೆಲಸ ಮಾಡಬಹುದು. ಅವರ ಕಾರ್ಯವೈಖರಿ ನೋಡಿ ಸ್ವಯಂ ಪ್ರೇರಿತರಾಗಿ ಯಾರಾದರೂ ಮುಂದೆ ಬಂದರೆ, ಎರಡನೇ ಹಂತದಲ್ಲಿ ಮತ್ತೊಂದು ತಂಡ ರಚಿಸಿ ತರಬೇತಿ ನೀಡಲಾಗುವುದು’ ಎಂದು ಹೇಳಿದರು.