‘ಶಾಸಕ, ಸಂಸದರಾಗುವವರಿಗೆ ಶೈಕ್ಷಣಿಕ ಅರ್ಹತೆ ನಿಗದಿಪಡಿಸಬೇಕು ಎಂದು ಹೇಳುತ್ತೇವೆ. ಆದರೆ, ಸುಶಿಕ್ಷಿತರು ಎನಿಸಿಕೊಂಡಿರುವ ಕೆಲವು ಐಎಎಸ್, ಕೆಎಎಸ್ ಅಧಿಕಾರಿಗಳೇ ಭ್ರಷ್ಟಾಚಾರ ನಡೆಸುತ್ತಾರೆ. ಇದಕ್ಕೆ ಕಾರಣ ನಮ್ಮ ಶಿಕ್ಷಣ ವ್ಯವಸ್ಥೆ. ಹುಬ್ಬಳ್ಳಿಯಲ್ಲೇ ಇರುವವರಿಗೆ ಹುಬ್ಬಳ್ಳಿಯ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಲು ಆಗುವುದಿಲ್ಲ. ಇಂತಹ ಶಿಕ್ಷಣ ನಮಗೆ ಸಿಗುತ್ತಿದೆ. ಅದಕ್ಕೆ, ಆಕ್ಸ್ಫರ್ಡ್, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಪ್ರಧಾನಮಂತ್ರಿ ಆದವರಿಗಿಂತ, ಬೀದಿಯಲ್ಲಿ ಚಹಾ ಮಾರಿ ಪ್ರಧಾನಮಂತ್ರಿ ಆದವರು ಉತ್ತಮ ಎನಿಸುತ್ತಾರೆ’ ಎಂದು ಸೂಲಿಬೆಲೆ ಹೇಳಿದರು.