7 ದಶಕಗಳ ನಂತರ ಇಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ಸಂಚಾರಕ್ಕೆ ಮುಕ್ತವಾಗಿರುವ ಈ ಮಾರ್ಗದಲ್ಲಿ ಗದಗದಿಂದ ಹುಯಿಲಗೋಳ, ಕದಡಿ, ಗಾರವಾಡ, ಬಳಗಾನೂರ, ಬೆಳವಣಿಕಿ ಮೂಲಕ ಹೊಳೆ-ಆಲೂರಿಗೆಹಾಗೂ ಗದಗದಿಂದ ಹುಯಿಲಗೋಳ, ಬಳಗಾನೂರು, ಬೆಳವಣಿಕಿ, ಯಾವಗಲ್ ಮಾರ್ಗವಾಗಿ ನರಗುಂದಕ್ಕೆ ಪ್ರತಿದಿನ ಎರಡು ಬಸ್ಗಳು ಸಂಚರಿಸುತ್ತವೆ ಎಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಪ್ಪ ತಾಳಿ ಹೇಳಿದರು.