ಮುಂಡರಗಿ– ಬೈಲೂರು ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಕೆಲವರು ಬಸವ ತತ್ವದ ಅನುಯಾಯಿಗಳಿಂದ, ತುಕಡೆ ತುಕಡೆ ಗ್ಯಾಂಗ್ಗಳಿಂದ ರಾಷ್ಟ್ರ ತುಂಡಾಗುತ್ತಿದೆ ಎಂದು ಆರೋಪ ಮಾಡಿದರು. ಆದರೆ, ಅಖಂಡ ಭಾರತವನ್ನು ಒಡೆದಿಡ್ಡು ವಿದೇಶಿಗರಲ್ಲ. ಚಾತುವರ್ಣ ವ್ಯವಸ್ಥೆಯ ಮನಸ್ಸಿನ ವ್ಯಕ್ತಿಗಳು ಭಾರತವನ್ನು ತುಕಡೆ ತುಕಡೆ ಮಾಡಿದರು. ಸಾಮಾಜಿಕ ನ್ಯಾಯ ಬೋಧಿಸಿದ ಬಸವಣ್ಣನವರು ಎಂದೆಂದಿಗೂ ವಿಶ್ವಗುರು’ ಎಂದು ಹೇಳಿದರು.