ಈ ವೃತ್ತದಲ್ಲಿ ರಾಷ್ಟ್ರೀಯ ಹಬ್ಬಗಳ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ಅಲ್ಲದೆ ಕನ್ನಡ ರಾಜ್ಯೋತ್ಸವದಂದು ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಆದರೆ ವೃತ್ತ ಹದಗೆಟ್ಟಿದೆ. ಅಲ್ಲದೆ ಈ ವೃತ್ತ ರಸ್ತೆಗೆ ಹೊಂದಿಕೊಂಡಿದೆ. ಕಾರಣ ಹಾಳಾಗುತ್ತಿರುವ ವೃತ್ತವನ್ನು ಸ್ವಲ್ಪ ಹಿಂದಕ್ಕೆ ಸರಿಸಿ ಕಟ್ಟಬೇಕು, ಅಲ್ಲಿ ಚೆನ್ನಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು’ ಎಂದು ಶಿವಯೋಗೆಪ್ಪ ಚಂದರಗಿ ಹೇಳಿದರು.