‘ಶಶಿಧರ ಹಟ್ಟಿ ಎರಡು ಮೂರು ತಿಂಗಳ ಹಿಂದೆ ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ, ಶರಣಗೌಡ ಎಲ್.ಪಾಟೀಲ ಇನ್ನೂ ಕೆಲವರು ಹೊಳೆಮಣ್ಣೂರಿನಲ್ಲಿ ಮರಳಿನ ಪಾಯಿಂಟ್ ಮಾಡಿಕೊಂಡಿದ್ದರು. ಶರಣಗೌಡ ಪಾಟೀಲ ತನಗೆ ಪ್ರತಿದಿನ ಮರಳಿನ ವ್ಯವಹಾರದ ಲೆಕ್ಕಪತ್ರ ಹಾಗೂ ಹಣವನ್ನು ಕೊಡುವಂತೆ ಒತ್ತಡ ಹೇರುತ್ತ, ಮಾನಸಿಕ ತೊಂದರೆ ಕೊಡುತ್ತಿದ್ದ. ವ್ಯವಹಾರದಲ್ಲಿ ತಾನು ಹಾಕಿದ್ದ ಹಣ ವಾಪಸ್ ನೀಡದೇ ತೊಂದರೆ ಮಾಡುತ್ತಿದ್ದ ಎಂಬ ಅಂಶ ಡೆತ್ನೋಟ್ನಲ್ಲಿದೆ’ ಎಂದು ಪೊಲೀಸರು ಅವರು ತಿಳಿಸಿದ್ದಾರೆ.